ಬಂದ ವಸಂತ ಬಂದ ಇದೋ

ಬಂದ ವಸಂತ ಬಂದ ಇದೋ
ಸೃಷ್ಟಿಗೆ ಪುಳಕವ ತಂದ ಇದೋ

ಮರಮರದಲು ಚಿಗುರಿನ ಗಣಿಯ
ಹಕ್ಕಿಯ ಉಲ್ಲಾಸದ ದನಿಯ
ತೆರೆಸಿದ, ಮಂದಾನಿಲನನು ಕರೆಸಿದ
ಹರಸಿದ ಹೊಲಗದ್ದೆಗೆ ತೆನೆಯ.

ತೆಳುಮುಗಿಲನು ನೀಲಿಯ ನಭಕೆ
ತಿಳಿಭಾವವ ಜನಮಾನಸಕೆ,
ಹೊಳೆಯುವ ಹಸಿರಿನ ಬಣ್ಣದ ಶಾಲನು
ಮರಳಿ ಹೊದೆಸಿ ಗಿಡಮರ ವನಕೆ.

ಹಸಿರು ಮರಗಳ ಮಾಡಿನಲಿ
ಬಣ್ಣದ ಎಲೆಗಳ ಗೂಡಿನಲಿ
ಮರಿಗಳ ಕೂಡಿ ನಲಿಯುವ ಹಕ್ಕಿಯ
ಸಂತಸ ಚಿಮ್ಮಿಸಿ ಹಾಡಿನಲಿ.

ಅರುಣನ ಬೆನ್ನಿಗೆ ಎಳ ಬಿಸಿಲ
ಬೆಳೆಯುವ ಗದ್ದೆಗೆ ಹೊಸ ಫಸಲ,
ತೂಗುವ ಗಾಳಿಗೆ ಆಡುವ ತೆನೆಯ
ಬಾಗಿ ತಬ್ಬಿ ಕೇಳುತ ಕುಶಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೬
Next post ಹಾಗಾದರೆ ಯಾರೂ ಮಾತಾಡಬಾರದೇ?

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys